ಪಾಕಿಸ್ತಾನದ ವಿರುದ್ಧ ಯುದ್ಧ ಅಗತ್ಯವಿಲ್ಲ ಎಂದಿದ್ದ ಸಿದ್ದರಾಮಯ್ಯ, ಒಮ್ಮೆಲೆ ಸಿಡಿದೆದ್ದ ಯೂಟಿ ಖಾದರ್ ಖಡಕ್ ಮಾತು

 | 
Nd
ಜಮ್ಮು ಕಾಶ್ಮೀರದಲ್ಲಿ ನಡೆದ ಘಟನೆಯನ್ನು ಎಲ್ಲರೂ ಒಟ್ಟಾಗಿ ಖಂಡಿಸಬೇಕು, ಉಗ್ರರಿಗೆ ತಕ್ಕ ಪಾಠ ಕಲಿಸಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು.ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ನಡೆದ ಘನೆಯಲ್ಲಿ ನಮ್ಮ ದೇಶದ ಹಲವಾರು ಜನ ನಮ್ಮನ್ನ ಅಗಲಿದ್ದಾರೆ, ನಮ್ಮ ಕರ್ನಾಟಕದರು ಮೂರು ಜನ ಇದ್ದಾರೆ ಅದರಲ್ಲಿ ನಮ್ಮ ಮಂಜುನಾಥ್ ಕೂಡ ಬಬ್ಬರು, ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇನೆ.
 ನಾನು ನಿನ್ನೆನೇ ಬರಬೇಕಿತ್ತು ಕಾರಣಾಂತರದಿಂದ ಬರಲು ಆಗಲಿಲ್ಲ, ಇವತ್ತು ಬಂದು ತಾಯಿ ಜೊತೆ ಮಾತನಾಡಿದ್ದೇನೆ, ನೋವಿನಲ್ಲಿರುವರನ್ನ ನಾವು ಎಷ್ಟೇ ಸಂತೈಸಿದು ಆಗದು, ಕುಟುಂಬದ ಜೊತೆ ಇಡೀ ದೇಶದ ಜನ ರಾಜ್ಯದ ಜನ ಇರುತ್ತೇವೆ, ಆ ಸಂದರ್ಭದಲ್ಲಿ ಆ ತಾಯಿ ಮತ್ತು ಮಗು ತೆಗೆದುಕೊಂಡ ಧೈರ್ಯ ಮೆಚ್ಚಲೇಬೇಕು ಎಂದರು.
ಪರಿಹಾರ ಹೆಚ್ಚಳ ಮಾಡುವ ಬಗ್ಗೆ ನಾವು ಚೆರ್ಚೆ ಮಾಡುತ್ತೇವೆ, ಪರಿಹಾರ ಹೆಚ್ಚಿಸುವ ಕುರಿತು ಸಿಎಂ ಜೊತೆ ಸಹ ಮಾತನಾಡುತ್ತೇನೆ, ಅಲ್ಲಿ ನಡೆದ ಘಟನೆ ಬಗ್ಗೆ ವಿವರವಾಗಿ ಕುಟುಂಬಸ್ಥರು ಹೇಳಿದ್ದರು ಎಂದರು.. ಇಡೀ ದೇಶದ ಜನ ಕೇಂದ್ರ ಸರ್ಕಾರ ಪರವಾಗಿದ್ದಾರೆ, ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲರು ನೈತಿಕ ಬೆಂಬಲ ನೀಡಿದ್ದಾರೆ, ಯಾರು ಬೆಂಬಲಿಸಿದ್ದಾರೋ ಹಾಗೂ ಘಟನೆಗೆ ಕಾರಣರಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು.
ಈ ಘಟನೆಗೆ ಕಾರಣರಾದವರನ್ನು ಕೂಡಲೇ ಪತ್ತೆ ಹಚ್ಚಬೇಕು, ನೆಮ್ಮದಿ ಕಸಿದ ಉಗ್ರಿರಿಗೆ ದೇಶ ತಕ್ಕ ಪಾಠ ಕಲಿಸಬೇಕು, ಎಲ್ಲರೂ ಒಟ್ಟಾಗಿ ದೇಶದ ಜೊತೆ ಕೈಜೋಡಿಸಬೇಕು, ದೇಶದ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು ಎಂದರು. ಸ್ಥಳೀಯ ಜನರು ಸಹ ಪ್ರವಾಸಿಗರ ನೆರವಿಗೆ ನಿಂತಿದ್ದಾರೆ, ಇದು ಭಾರತೀಯರ ಪರಂಪರೆ ಇದನ್ನ ಕಾಶ್ಮೀರದವರು ತೋರಿಸಿದ್ದಾರೆ, ಶಾಸಕರ ಅನರ್ಹ ವಿಚಾರಕ್ಕೆ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ ಎಂದರು.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.