ಅತಿಯಾದ ತೂಕ ಇಳಿಸಲು ಹೋಗಿ ಎಡವಟ್ಟು ಮಾಡಿಕೊಂಡ ಸ್ಪಂದನಾ, ವಿಜಯ್ ರಾಘವೇಂದ್ರ ಕಣ್ಣೀರು

 | 
Jhg

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಘಾತದಿಂದ ಅಗಲಿದ್ದಾರೆ. ಸಹೋದರ ಸಹೋದರಿಯರ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದ ಸ್ಪಂದನಾ ಶಾಪಿಂಗ್ ಮುಗಿಸಿಕೊಂಡು ಹೋಟೆಲ್‌ ರೂಮ್‌ಗೆ ತೆರಳುವಾಗ ಹೃದಯಾಘಾತವಾಗಿದೆ ಎಂದು ಆಪ್ತ ಮೂಲಗಳು ಹೇಳುತ್ತದೆ. ಮತ್ತೊಂದೆಡೆ ಅವರು ದಿಢೀರ್‌ ಅಂತಾ 16 ಕೆಜಿ ತೂಕವನ್ನು ಇಳಿಸಿಕೊಂಡಿದ್ದರು ಎನ್ನಲಾಗ್ತಿದೆ. 

ಪ್ರತಿದಿನ ಜಿಮ್‌. ಡಯೆಟ್‌ ಮಾಡಿ ಸ್ಪಂದನಾ ತೂಕವನ್ನು ಇಳಿಸಿಕೊಂಡಿದ್ದರಂತೆ. ಹಾಗಾಗಿ ಇದರಿಂದಲೇ ಅವರಿಗೆ ಹೃದಯಾಘಾತವಾಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ನಟ ವಿಜಯ್‌ ರಾಘವೇಂದ್ರ, ತಂದೆ ಬಿ.ಕೆ. ಶಿವರಾಮ್‌ ಸದ್ಯ ಬ್ಯಾಂಕಾಕ್‌ಗೆ ತೆರಳಿದ್ದಾರೆ. ಇನ್ನು ಕಳೆದ ಹಲವು ದಿನಗಳಿಂದ kitos ಡೈಟ್ ಮಾಡುತ್ತಿದ್ದ ಸ್ಪಂದನಾ ಕುರಿತಾಗಿ ಯುವಕರು ಮಾಡರ್ನ್‌ ಶೈಲಿ ಫಾಲೋ ಮಾಡುತ್ತಿದ್ದಾರೆ ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನೋದು ತಿಳಿಯುತ್ತಿಲ್ಲ ಈ ಕಿಟೋ ಡಯಟ್‌ನಲ್ಲಿ ಕಾರ್ಬೋಹೈಡ್ರೇಟ್ ತುಂಬಾ ಕಡಿಮೆ ಮಾಡುತ್ತಾರೆ ಪ್ರೋಟಿನ್‌ ಮತ್ತು ಫ್ಯಾಟ್‌ನ ಹೆಚ್ಚಿಗೆ ತೆಗೆದುಕೊಳ್ಳುತ್ತಾರೆ. 

ಹೀಗೆ ಮಾಡುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ ಮಲಬದ್ಧತೆ ಶುರುವಾಗುತ್ತದೆ ಮ್ರೈಕ್ರೋ ನ್ಯೂರಿಯಂಟ್ಸ್‌ ಕಡಿಮೆಯಾಗುತ್ತದೆ. ನಾವು ತರಕಾರಿ ಹಣ್ಣುಗಳನ್ನು ತೆಗೆದುಕೊಂಡಾಗ ಆರೋಗ್ಯ ಚೆನ್ನಾಗಿರುತ್ತದೆ. ಅದೆಲ್ಲಾ ಬಿಟ್ಟು ಹೈ ಫ್ಯಾಟ್‌ ಮತ್ತು ಪ್ರೋಟಿನ್ ಡಯಟ್ ಮಾಡುತ್ತಾರೆ ಇದರಿಂದ ಇದ್ದಕ್ಕಿದ್ದಂತೆ ತೂಕ ಇಳಿಯುತ್ತದೆ. ಹೆಣ್ಣು ಮಕ್ಕಳಿಗೆ ಮೆನೋಪಾಸ್ ಆಗುವವರೆಗೂ ದೇಹದಲ್ಲಿ ಹಾರ್ಮೋನ್‌ಗಳು ಪ್ರಡ್ಯೂಸ್ ಆಗುತ್ತದೆ ಇದೆಲ್ಲಾ ನಮಗೆ ಹೃದಯಾಘಾತ ಆಗದಂತೆ ಕಾಪಾಡುತ್ತದೆ. 

ಹೃತುಚಕ್ರ ನಿಂತ ಮೇಲೆ ಹೆಂಗಸರು ಮತ್ತು ಗಂಡಸರ ದೇಹ ಒಂದೇ ರೀತಿ ಇರುತ್ತದೆ. ಕರೋನಾ ವ್ಯಾಕ್ಸಿನ್ ತೆಗೆದುಕೊಂಡರೆ ಹೃದಯಾಘಾತ ಆಗುತ್ತದೆ ಎಂದು ಅನೇಕು ಹೇಳುತ್ತಿದ್ದಾರೆ ಅದರೆ ಅದು ಸುಳ್ಳು ಸುದ್ದಿ ಎಂದು ವೈದ್ಯರು ಹೇಳಿದ್ದಾರೆ. ಇನ್ನು ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ. 

2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ದಂಪತಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಂ ಇತ್ತೀಚೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಸ್ಪಂದನಾ ಸಹೋದರನ ಪರ ಪ್ರಚಾರ ನಡೆಸಿದ್ದರು. ಥೈಲ್ಯಾಂಡ್ ನಲ್ಲಿ ನಿನ್ನೆ ಸಂಜೆ ಶಾಪಿಂಗ್ ಮುಗಿಸಿ ರೂಂಗೆ ಬರುವಾಗ ಈ ಘಟನೆ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಸ್ಪಂದನಾರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.