ನಿನ್ನ ಸಂಸಾರ ಹಾಳು ಮಾಡಲು ನೋಡುತ್ತಿದ್ದಾರೆ, ರಿಷಭ್ ಶೆಟ್ಟಿಗೆ ದೈವ ನುಡಿ
Apr 8, 2025, 15:39 IST
|

ಆದರೆ, ಕಾಂತಾರ ಸಿನಿಮಾ ಬಂದ ಬಳಿಕ ಪಂಜುರ್ಲಿ ದೈವದ ವೇಷಭೂಷಣ ತೊಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದು, ತಮಾಷೆ ಮಾಡುವುದು ಕೂಡ ಹೆಚ್ಚಾಗಿತ್ತು. ಇದರಿಂದಾಗಿ ಕೊನೆಗೆ ತುಳುನಾಡಿನ ಜನತೆ ಕಾಂತಾರ ಸಿನಿಮಾವೊಂದು ಬರದೆ ಹೋಗಿದ್ದರೆ ಇಂಥ ಅಪಪ್ರಚಾರಗಳು ತಪ್ಪುತ್ತಿದ್ದವು ಎಂದು ಮಾತನಾಡಿಕೊಂಡರು.
ಕಾಂತಾರದ ಬಳಿಕ ಕಾಂತಾರ ಚಾಪ್ಟರ್-1 ಎನ್ನುವ ಸಿನಿಮಾವನ್ನು ರಿಷಬ್ ಶೆಟ್ಟಿ ಮಾಡುತ್ತಿದ್ದಾರೆ. ಆದರೆ, ಈ ಸಿನಿಮಾ ಸೆಟ್ಟೇರಿದ ಕ್ಷಣದಿಂದಲೂ ನಟ-ನಿರ್ದೇಶಕ ರಿಷಬ್ ಸಾಲು ಸಾಲು ತೊಂದರೆಗಳನ್ನು ಎದುರಿಸುವಂತಾಗಿದೆ. ಹೌದು, ಕಾಂತಾರ ಚಾಪ್ಟರ್-1 ಸಿನಿಮಾಗೆ ಒಂದರ ಮೇಲೊಂದು ವಿಘ್ನ ಎದುರಾಗಿದೆ. ಕಾಂತಾರ ಬಂದಾಗಿದೆ. ಅದರ ಭಾಗವಾಗಿ ಮತ್ತೆ ಅದೇ ರೀತಿಯ ಯಾವುದೇ ಸಿನಿಮಾ ಮಾಡಬಾರದು ಎಂದು ದೈವಾರಾಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಕಾಂತಾರ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ತುಳುನಾಡಿನಲ್ಲೇ ಆಗ್ರಹ ಮಾಡಲಾಗಿತ್ತು. ಇದರಿಂದ ಸಿನಿಮಾ ಹೇಗೋ ಪಾರಾಗಿ ಯಶಸ್ಸು ಕಂಡಿತ್ತು.ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ಸರಿಯಾಗಿ ವೇತನ ನೀಡಿಲ್ಲ ಎಂದು ಸಹ ಕಲಾವಿದರು ಪ್ರತಿಭಟನೆ ಮಾಡಿದ್ದು ಕೂಡ ಸುದ್ದಿಯಾಗಿತ್ತು. ಈಗ ಸ್ವತಃ ರಿಷಬ್ ಶೆಟ್ಟಿಗೆ ದೈವದಿಂದಲೇ ಎಚ್ಚರಿಕೆ ಬಂದಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೇಮದಲ್ಲಿ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಈ ವೇಳೆ ಪಂಜುರ್ಲಿ ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್ಗಳಿದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಅದರೊಂದಿಗೆ ರಿಷಬ್ ಶೆಟ್ಟಿಗೆ ಶತ್ರುಕಾಟ ಇರುವ ಬಗ್ಗೆಯೂ ಎಚ್ಚರಿಕೆಯನ್ನು ನೀಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,21 Apr 2025
ಓಂ ಪ್ರಕಾಶ್ ಇ ಹಲೋಕ, ಓಡೋಡಿ ಬಂದ ಕುಟುಂಬಸ್ಥರು
Mon,21 Apr 2025